ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರಾಂತಿಗೀತೆ
Posted date: 11 Wed, Jan 2012 ? 08:57:14 AM

ಶ್ರೀ ಸಂಗೊಳ್ಳಿ ರಾಯಣ್ಣ ಸಿನಿ ಕಂಭೈನ್ಸ್ (ಬೆಳಗಾವಿ) ಲಾಂಛನದಲ್ಲಿ ಆನಂದ್ ಬಿ. ಅಪ್ಪುಗೋಳ ನಿರ್ಮಿಸುತ್ತಿರುವ ಅತಿ ಹೆಚ್ಚು ಬಜೆಟ್‌ನ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗಂಡು ಮೆಟ್ಟಿದ ನಾಡು, ಇದು ಗಂಡುಗಲಿಗಳ ಬೀಡು, ಬಂಡುಮಾದದ ದಂಡು, ಬಂಡಾಯವೆದ್ದಿದೆ ನೊಂದು, ದೇಶ ಸೇವೆಯೇ ಈಶಸೇವೆಯೇ, ಕಾದಾಡುವೆವು ಅಳಿದರೂ ದೇಶವ ಉಳಿಸಲು ಹೋರಾಡಿ  ಕೇಶವಾದಿತ್ಯ ರಚಿಸಿರುವ ಕ್ರಾಂತಿಗೀತೆಯನ್ನು ಚಿತ್ರೀಕರಿಸಲಾಯಿತು.  ಇದರಲ್ಲಿ ದರ್ಶನ್ ಶಶಿಕುಮಾರ್, ರಮೇಶ್ ಭಟ್ ಬ್ರಿಟೀಷರು ಹಾಗೂ ನಾಡ ಯೋಧರು ಪಾಲ್ಗೊಂಡಿದ್ದರು. ಸಂಭಾಷಣೆ, ಕೇಶವಾದಿತ್ಯ, ಸಂಗೀತ ಯಶೋವರ್ಧನ ಚಿತ್ರಕಥೆ - ಕೇಶವಾದಿತ್ಯ - ನಾಗಣ್ಣ, ಛಾಯಾಗ್ರಹಣ ರಮೇಶ್ ಬಾಬು, ಸಹ ನಿರ್ದೇಶನ ಲಕ್ಷ್ಮೀಕಾಂತ್ ದೇವರಾಜ್ ಪಾಲನ್, ಕಲೆ ಮೋಹನ್ ಪಂಡಿತ್, ಸಂಕಲನ ದೀಪು ಎಸ್.ಕುಮಾರ್, ಸಾಹಸ ರವಿವರ್ಮ, ನೃತ್ಯ ಚಿನ್ನಿ ಪ್ರಕಾಶ್, ಶಿವಶಂಕರ್, ನಿರ್ವಹಣೆ : ಸುಂದರರಾಜ್ - ಸಗಾಯರಾಜ್ ತಾರಾಗಣದಲ್ಲಿ ದರ್ಶನ್, ಶಶಿಕುಮಾರ್, ಜಯಪ್ರದ, ಲಿಖಿತ, ಶ್ರೀನಿವಾಸಮೂರ್ತಿ ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್, ರಾಜೇಶ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed